Friday, October 24, 2008

ಓ ಕನ್ನಡನಾಡಿನ, ಗಂಧದಬೀಡಿನ ಮುತ್ತು ರತ್ನಗಳಿರಾ.....!

ಕನ್ನಡನಾಡಿನ, ಗಂಧದಬೀಡಿನ ಮುತ್ತು ರತ್ನಗಳಿರಾ.....!

ನಿಮ್ಮ ಹೃದಯ ಚಿಪ್ಪಿನಲ್ಲಿ ಬಚ್ಚಿಟ್ಟುಕೊಂಡಿರುವ
ನಿಮ್ಮ ಕನ್ನಡತನವನ್ನು ಹೊರಸೂಸಿ......|
ವಿಶ್ವದಾದ್ಯಂತ ಕನ್ನಡನಾಡು, ನುಡಿಯ ಸುಗಂಧವ ಬೀರಿ......
ರಾಜ್ಯವನ್ನಾಳುತ್ತಿರುವ ಜನನಾಯಕರನ್ನು ಬರೀ ಬೊಗಳೆ ಭಾಷಣ, ಪ್ರಚಾರ, ಆಶ್ವಾಸನೆ ಮಾಡುವುದನ್ನು ಬಿಟ್ಟು
ನಾಡಿಗಾಗಿ, ಮಾತ್ರು ಭಾಷೆಗಾಗಿ, ನಿರ್ಮಲ ಮನಸ್ಸಿನಿಂದ ದುಡಿಯಲು ಪ್ರೇರೆಪಿಸಿ.

ಕನ್ನಡಿಗರು ಹೇಡಿಗಳಲ್ಲ....! ಕುರಿಗಳೂ ಅಲ್ಲ.....!
ದಡ್ಡರಂತೂ ಮೊದಲೇ ಅಲ್ಲ....!
ಹೀಗಿದ್ದರೂ ಈ ಅಳುಕು, ಈ ಹಿಂಜರಿಯುವಿಕೆ ಯಾಕೆ.....?
ಸೋಮಾರಿತನವೇ, ಅಥವಾ ಬರೀ ಅಂಧಾಭಿಮಾನವೇ.....?

ನಿಮ್ಮ ಮಾತ್ರುಭಾಷೆಯನ್ನು ಉಳಿಸಲು,ಬೆಳೆಸಲು ಸಂಕೋಚವೇ....?
ಇನ್ನಾದರು ನಿಮ್ಮ ಅಂತರಾಳದ ಕಣ್ಣು ತೆರೆದು ನೋಡಿ ಕನ್ನಡಿಗರೇ......!
ನಮ್ಮ ಹಿರಿಯರು, ಗುರುಗಳು, ಕವಿಗಳು,ಕಲಾವಿದರು, ಸಾಹಿತಿಗಳು, ಗಣ್ಯರು, ಸಾರ್ವಭೌಮರು
ಬಿಟ್ಟು ಹೋಗಿರುವ ಈ ನೆಲ, ಜಲ, ಭಾಷೆಯ ಬೆಳೆಸೋಣ.
ಮಾತೇ ಕನ್ನಡತಾಯಿ ಭುವನೇಶ್ವರಿಯ ಪಾದಗಳಿಗೆ ನಮ್ಮ ತನು ಮನ ಅರ್ಪಿಸೋಣ..
ಜೈ ಭುವನೇಶ್ವರಿ
ಜೈ ಕರ್ನಾಟಕ
ಜೈ ಭಾರತಾಂಬೆ