Friday, March 9, 2012

BJP ಪಾರ್ಟಿಯ...... ಚಿಂತನ...... ಮಂಥನ......!

BJP ಪಾರ್ಟಿಯ...... ಚಿಂತನ...... ಮಂಥನ......!
ನಮ್ಮ ಯಡ್ಡಿಗೆ ತಂತು ಮುಖ ಭಂಗದ ಚುಂಬನ.....
ಕಾಶಿನಲ್ಲಿ ಇಬ್ಬರು ಸೇರಿ ವ್ರತ ಮಾಡಿ, ಮಾಡಿದ್ದೀವಿ ವಿಶ್ವನಾಥನಲಿ ಪ್ರಾರ್ಥನಾ..
ಆದರೆ ಈಡೇರಲಿಲ್ಲ ನಮ್ಮ ಮನದಾಳದ ಭಾವನ....
so better for come out from this Tension ......
we will go to Kashmir ಅಲ್ಲಿಯ weather ನಲ್ಲಿ ನಡೆಯಲಿ
ನಮ್ಮೀರ್ವರ...ಚಿಂತನ.....ಮಂಥನ......
HAPPY JOURNEY

ಬೀದಿನಾಯಿಗಳ ಹಾವಳಿಯ ಕುರಿತು :

ಬೀದಿನಾಯಿಗಳ ಹಾವಳಿಯ ಕುರಿತು :

ಪತ್ರಿಕಾ ಪ್ರತಿನಿಧಿಗಳೇ...! ಟಿ.ವಿ. ಮಾದ್ಯಮದ ಮಿತ್ರರೇ ....! ಹಾಗೂ ಬೆಂಗಳೂರು ನಗರದ ನಾಗರಿಕರೇ...!

ಬೆಂಗಳೂರು ನಗರದ ಚೊಕ್ಕ ಸಂದ್ರ ವಾರ್ಡ್ ನಲ್ಲಿ ಮೊನ್ನೆ ನಮ್ಮ ಇತರ ಬಂಧು-ಮಿತ್ರರಿಂದ ನಡೆದ ಘಟನೆಗೆ,
ಆದ ಅಚಾತುರ್ಯಕ್ಕೆ ದಯಮಾಡಿ ಕ್ಷಮಿಸಿ... ಅವರೆಲ್ಲರ ಪರವಾಗಿ ನಾನು ಕ್ಷಮೆಯಾಚಿಸುತ್ತಿದೇನೆ...
ಬಂಧುಗಳೇ...! ನಿಮ್ಮಗೆಲ್ಲಾ ತಿಳಿದಿರುವಂತೆ ಹಿಂದೆ ಉದ್ಯಾನಿ ನಗರವಾಗಿದ್ದ ನಮ್ಮ ಬೆಂಗಳೂರು ನಗರ ಇತ್ತೀಚೆಗೆ ಕಾಂಕ್ರಿಟ್ ನಗರವಾಗಿ ಹೋಗಿದೆ.
ಎಲ್ಲಿ ನೋಡಿದರೂ ಬರೀ ಕಟ್ಟಡಗಳೇ ತುಂಬಿ ವಿಶ್ರಾಂತಿಗೆ ನಮಗೆ ನೆರಳೇ ಇಲ್ಲವಾಗಿದೆ. ಮುಂಚೆ ಅಕ್ಕ -ಪಕ್ಕದ ಮನೆಯವರು, ಅಂಗಡಿಯವರು, ಕರುಣೆ ಪ್ರೀತಿಯಿಂದ ನಮಗೆ ಊಟ-ತಿಂಡಿ ಹಾಕುತ್ತಿದ್ದರು. ಇತ್ತೀಚೆಗಂತೂ ನಮಗೆ ಸರಿಯಾಗಿ ಊಟ-ತಿಂಡಿ ಸಿಗದೇ ಹಸಿವಿನಿಂದ ರಸ್ತೆ ಬದಿಗಳಲ್ಲಿ ನರಳುತ್ತಿದೇವೆ. ಕೆಲವೊಮ್ಮೆ ನಾವು ಹಸಿವಿನಿಂದ ಮಲಗಿದ್ದರೆ ಈ ಮೋಟರ್ ಬೈಕಿನವರು ನಮ್ಮವರ ಮೇಲೆ ಗಾಡಿ ಹಾರಿಸಿಕೊಂಡು ಹೋಗುತ್ತಾರೆ.

ಇನ್ನೊಂದು ಕಡೆ high tech ವರ್ಗದ, ನಮ್ಮ ಕುಲದ ಬಂಧು-ಮಿತ್ರರು, ಹೊರ ದೇಶದಿಂದ ಬಂದಿರುವ ಇತರ ವರ್ಗದ ನಾಯಿಗಳು A/c CAR ನಲ್ಲಿ ಓಡಾಡುತ್ತಾ, hygienic food ತಿನ್ನುತ್ತಾ, ಒಳ್ಳೊಳ್ಳೆ Jocket, ಬೆಲ್ಟ್ ಹಾಕಿಕೊಂಡು Bangalore park ಗಳಲ್ಲಿ Morning walking ಗೆ style ಆಗಿ ಓಡಾಡುತ್ತಾ ನಮ್ಮನ್ನು ಅಣಕಿಸುತ್ತಿದ್ದಾರೆ. ನಮ್ಮ ಕಷ್ಟ ಕೇಳುವವರೇ ಇಲ್ಲವಾಗಿದ್ದರೆ.
ಆ ಕಾರ್ಪೋರೇಷನ್ ನವರು ಇದುವರೆಗೂ ನಮಗೆಂತ ಏನೂ ಅನುಕೂಲ ಮಾಡಿರುವರು ಹೇಳಿ...? ಬಡವರಿಗೆಂದು ವಾಸಿಸಲು ಆಶ್ರಯ ಯೋಜನೆ, ಆ ಯೋಜನೆ ಈ ಯೋಜನೆ ಅಂತ ಇದೆ. ನಮಗೆ ಅಂತ ಯಾವ ಯೋಜನೆ ಈ ಸರ್ಕಾರದವರು ಅನುಷ್ಟಾನಕ್ಕೆ ತಂದಿರುವರು ನೀವೇ ಹೇಳಿ........?
ಈ ಸರ್ಕಾರದವರು,ಕಾರ್ಪೋರೇಷನ್ ನವರು ಆ ಕಾರ್ಯಕ್ಕೆ, ಈ ಶಂಕುಸ್ತಾಪನೆ ಎಂದು ನೆಪ ಹೇಳಿ ಸಾವಿರಾರು ಕೋಟಿ ಲೂಟಿ ಮಾಡುತ್ತಿದ್ದಾರೆ. ನಮ್ಮ ಹೊಟ್ಟೆ ಪಾಡು ಕೇಳುವವರೇ ಇಲ್ಲವಾಗಿದೆ. ಹಸಿವಿನ ನೋವಿನಲ್ಲಿ ನಿಮ್ಮಂತಹ ಹಿರಿಯರನ್ನು ಕಚ್ಚಲು ಬಂದರೇ ಹೊಡೆಯುವಿರಿ, ಭಯದಿಂದ, ತಿಳಿಯದೆ, ಹಸಿವಿನ ನೋವಿನಿಂದ ಪುಟ್ಟ
ಕಂದಮ್ಮಗಳನ್ನು ನಮ್ಮ ಬಂಧು-ಮಿತ್ರರು ಹಾವಳಿ ಮಾಡಿರುವರು. ಅದಕ್ಕಾಗಿ ನಾನು ವಿಷಾದಿಸುವೆ. ಎಷ್ಟೇ ಅದರೂ ನಾವು ನಾಯಿ ಜನ್ಮದವರು ನಿಮ್ಮಷ್ಟು ಬುದ್ದಿ-ತಿಳುವಳಿಕೆ ನಮಗೆ ಇಲ್ಲ.
ವಿನಾ ಕಾರಣ ನಮ್ಮನ್ನು ದೂಷಿಸದೆ, ದಯಮಾಡಿ ನಿಮ್ಮ ಕಾರ್ಪೋರೇಷನ್ ಅಧಿಕಾರಿ ವರ್ಗದವರೊಡನೆ ಮಾತಾಡಿ, ಮೇಯರ್ ರವರಿಗೆ ಬೆಂಗಳೂರು ನಗರದಲ್ಲಿ ನಮಗೆ ಸೂಕ್ತ ವಸತಿ ಹಾಗೂ ಊಟದ ವ್ಯವಸ್ತೆಯನ್ನು
ಮಾಡಿಕೊಡುವುದಕ್ಕೆ ಹೇಳಿ. ನೀವು ಈ ವಿಷಯವಾಗಿ ಕೂಡಲೇ ಕ್ರಮ ಕೈಗೊಳ್ಳಲು ಕಾರ್ಪೋರೇಷನ್ ಎದುರು ಧರಣಿ ಮಾಡುವುದೇ ಆದರೆ, ಧರಣಿ ಮಾಡುವಾಗ ನಮ್ಮನ್ನು ಆಹ್ವಾನಿಸಿ, ನಮಗೆ ಸೂಕ್ತ ವಾಹನಗಳ ವ್ಯವಸ್ಥೆ ಮಾಡಿ. ಇಡೀ ಬೆಂಗಳೂರು ನಗರದ ನಮ್ಮ ಬಂಧು-ಮಿತ್ರರೆಲ್ಲರೂ ನಿಮ್ಮ ಧರಣಿಗೆ ಕೈ ಜೋಡಿಸುವರು.
ನಿಮ್ಮ ಮನೆ ಅಂಗಳದ, ಪುಟ್ಟ ಕಂದಮ್ಮಗಳ ಬಾಳಿಗೆ ಇನ್ನೆಂದೂ ನಾವು ನೋವುವುಂಟು ಮಾಡೆವು.
ಬೆಂಗಳೂರು ನಾಗರೀಕರೇ ಎಲ್ಲಾ ನಿಮ್ಮ ಮುಂದಿನ ಗುರುತರ ತೀರ್ಮಾನದಲ್ಲಿ ನಿಂತಿದೆ. ಇಲ್ಲಿ ನೆರೆದಿರುವ ಎಲ್ಲಾ ಚಾನೆಲ್ ನ ಮಾದ್ಯಮ ಮಿತ್ರರು ಇದಕ್ಕೆ ಸಹಕರಿಸಬೇಕೆಂದು ಕೇಳಿಕೊಳ್ಳುತ್ತೇನೆ.
ಧನ್ಯವಾದಗಳು
ಜೈ ಕರ್ನಾಟಕ
312513_138743939559773_100002725039869_140000_1434395349_n.jpg

Thursday, December 18, 2008

ಡಾಕ್ಟರ್........ರೇಟ್ !

ಡಾಕ್ಟರೇಟ್........! ಡಾಕ್ಟರೇಟ್........!
ಯಾರಿಗ್ ಬೇಕು ಡಾಕ್ಟರೇಟ್........!
ರಾತ್ರಿ ಇಡೀ ಓದುವ ಹಾಗಿಲ್ಲ...
LAB, EXAMS ಕಾಟವಿಲ್ಲ....|
ಡೊನೇಶನ್.. ಗಿನೆಶನ್....ಭಾರವಿಲ್ಲ...
ಸರ್ಟಿಫಿಕೇಟ್, enterence exams ಬೇಕಾಗಿಲ್ಲ.
ಡಾಕ್ಟರೇಟ್........! ಡಾಕ್ಟರೇಟ್........!
ಯಾರಿಗ್ ಬೇಕು ಡಾಕ್ಟರೇಟ್........?
ರೋಗಗಳ ಅರಿವಿರಬೇಕಿಲ್ಲ......
ರೋಗಿಗಳ ಕೈ, ಬಾಯಿ ವಾಸನೆಯ ನಾತವಿಲ್ಲ.....
ಡಾಕ್ಟರೇಟ್........! ಡಾಕ್ಟರೇಟ್........!
ಯಾರಿಗ್ ಬೇಕು ಡಾಕ್ಟರೇಟ್........?
ಅರ್ಹತೆ :
ವಿದ್ಯಾರ್ಹತೆ ಬೇಕಿಲ್ಲ..., ಅಭ್ಯರ್ಥಿಯ ತಾತ, ಮುತ್ತಾತ ಅಥವಾ ಆತ ರಾಜಕಾರಣಿ ಆಗಿದ್ದರೆ ಸಾಕು.
ಸಾಕಷ್ಟು ಸಾರ್ವಜನಿಕರ ಹಣ ಕೊಳ್ಳೆ ಹೊಡೆದಿರಬೇಕು.
ಹೆಣ್ಣಾದರೆ : ರೂಪದರ್ಶಿಯಾಗಿರಬೇಕು, ಅಂಗಾಂಗ ಪ್ರದರ್ಶಿಸುವವಳಾಗಿರಬೇಕು, ಒನಪು, ವೈಯಾರ ಬಿಗುತ್ತ ರಾಜಕಾರಣಿಗಳ, ವಿಶ್ವ ವಿದ್ಯಾಲಯ ಪದಾಧಿಕಾರಿಗಳ ಸ್ನೇಹ ಸಂಪರ್ಕ ಇವಿಷ್ಟಿದ್ದರೆ ಸಾಕು.
ನಿಮ್ಮ ಅಕ್ಕ-ಪಕ್ಕ, ಎದುರು-ಬದಿರು,
ಪರೋಡಿನೆ ಆಗಿರಿ, ಗೂಂಡನೇ ಆಗಿರಿ,
3 ನೇ ಕ್ಲಾಸ್ ಫೈಲೇ ಆಗಿರಲಿ...
ಅವರು ಏನೇ... ಆಗಿರಲಿ,
ಆ ಶಿರೂಮಣಿಗಳು ನಿಮಗೆ ಕಂಡುಬಂದಲ್ಲಿ ಅವರನ್ನು ಕೂಡಲೇ ಇಲ್ಲಿ ಸಂಪರ್ಕಿಸಲು ತಿಳಿಸಿ..
http:// www.ಡಾಕ್ಟರೇಟ್. WORLD ವಿದ್ಯಾಲಯ. com
ಅವರಿಗೆ ಡಾಕ್ಟರೇಟ್ ಪದವಿ, ಪುರಸ್ಕಾರ ಲಭಿಸುತ್ತದೆ.
ಜೈ ಕರ್ನಾಟಕ
ಜೈ ಡಾಕ್ಟರ್........ರೇಟ್ !

Friday, November 28, 2008

ದೇಶ ಆಳುತ್ತಿರುವ ನಾಯಕರೇ.... ಉಗ್ರರನ್ನು ನಿಗ್ರಹಿಸಿ...!ಭಾರತವನ್ನು ಸಂರಕ್ಷಿಸಿ ......! ಇಲ್ಲವಾದರೆ.....ನಿಮ್ಮ ಚಿತೆಗೆ ರಕ್ತ ಸಿಂಪಡಿಸಿ......

ಆತ್ಮ್ಮಿಯರೇ ಕಳೆದ ಎರಡು ದಿನಗಳ ಕರಾಳ ದೃಶ್ಯಗಳನ್ನು ನೋಡಿದಿರಾ .. ...?
ಯಾರಿಂದ, ಯಾರ ಮುರ್ಖತನದಿಂದ ಮತ್ತೆ ಮತ್ತೆ ಇಂಥ ದುರ್ಗಟನೆ ನಡೆಯುತ್ತಲೇ ಇದೇ ...?
ಮಲಗಿರುವ ರಾಜಕಾರಣಿಗಳೇ...!
ಬರೀ ಆಸ್ತಿ ಮಾಡುವುದರಲಿ....., ದುರಾಡಳಿತ ನಡೆಸುವುದರಲಿ....ತೊಡಗಿರುವ
ನಿಮ್ಮ ಬೇಜವಾಬ್ದಾರಿಂದಾಗಿ ದೇಶ ತಲ್ಲಣಿಸುತ್ತಿದೆ...
ಸಾರ್ವಜನಿಕರ ಪ್ರಾಣ ಹರಣವಾಗಿ ಭಯಭೀತಿಯಿಂದ ತತ್ತರಿಸುತ್ತಿದ್ದಾರೆ...
ಸ್ವಲ್ಪ ನಿಮ್ಮ ಚಲನವಲನವನ್ನು ಇತ್ತ ಗಮನವರಿಸಿ.....
ಕೆಟ್ಟ ಅಧಿಕಾರ ನಡೆಸಿದ್ದು ಸಾಕು ಮಾಡಿ
ನಿಮ್ಮ ದುರಸೆಗಿಸ್ಟು ಬೆಂಕಿ ಹಾಕಿ
ಸುಟ್ಟು ಬೆಂದು ಹೋಗುತ್ತಿರುವ ನಮ್ಮ ದೇಶವನ್ನು
ನಿಮ್ಮನ್ನು ಆಯ್ಕೆ ಮಾಡಿದ ತಪ್ಪಿಗೆ ರಕ್ಷಿಸ ಬನ್ನಿ...
ಇಂದು ನೀವು ಭಯೋತ್ಪಾದನೆ, ಭಯೊತ್ಪದಕರನ್ನು ಬಡಿದಟ್ಟಿ ಆ ಉಗ್ರರನ್ನು,
ನಮ್ಮ ದೇಶದಾದ್ಯಂತ ಸಂಪೂರ್ಣ ನಾಶ ಮಾಡದಿದ್ದರೆ ನಿಮ್ಮ ಚಿತೆಗೂ ಬೆಂಕಿ ಹಚ್ಚಿಸಿಕೊಳ್ಳಲು ಸಿದ್ದ್ದರಾಗಿ....
ಅಂದು ಭಾರತದ ಸ್ವಾತಂತ್ರಕ್ಕಾಗಿ ಹೋರಾಟ....!
ಇಂದು ಭಾರತದ ರಕ್ಷಣೆಗಾಗಿ ಹೋರಾಟ....!
ಭಾರತ ದೇಶದ ರಕ್ಷಣೆಗೆ ಪಣ ತೊಟ್ಟು ನಿಂತಿರುವ ನಮ್ಮ ರಕ್ಷಣಾಪಡೆಗೆ ಭಗವಂತನು ಸಕಲ ಶಕ್ತಿಯನ್ನು ನೀಡಲಿ..
ಆ ದೇವನು ನಮ್ಮ ಭಾರತದ ಯೋಧರ ಜೊತೆಗಿರಲಿ ಎಂದು ಬೇಡಿಕೊಳ್ಳೋಣ.
ಹೋರಾಟದಲ್ಲಿ ಮಡಿದ ನಮ್ಮ ಪೋಲಿಸ್ ಆಧಿಕಾರಿ ಮಹಾನುಭಾವರಿಗೆ
ಹೃದಯ ಪೂರ್ವಕ ಶ್ರದ್ಧಾಂಜಲಿ...
ಜೈ ಜವಾನ್, ಜೈ ಕಿಸಾನ್, "ಮೇರಾ ಭಾರತ್ ಮಹಾನ್ ".

Monday, November 10, 2008

ಪರಮಾತ್ಮ ಈ ಭೂಮಿಯನ್ನು ಗೋಳಾಕರದಲ್ಲಿ ಮೊಡಿಸಿದ.....
ಮಾನವ ಈ ಭೂಮಿಯನ್ನು ಹೋಳು ಹೋಳಾಗಿಸಿದ.....!

ಬೆಳಕಿನ ಬೆಲೆ ತಿಳಿಯುವುದು ಕತ್ತಲಲ್ಲಿ....
ಸತ್ಯವಂತರ ಬೆಲೆ ತಿಳಿಯುವುದು ಅಂತ್ಯದಲ್ಲಿ.........!

ವಯಸ್ಸು ಇರುವಾಗ ಗರ್ವ ಆಟವಾಡಿಸುತ್ತದೆ.....
ವಯಸ್ಸಾದಾಗ ಮನಸು ಆಟವಾಡಿಸುತ್ತದೆ.............!

ಯಶಸ್ಸು ಪ್ರೇಯಸಿ ಇದ್ದಂತೆ.......ಯಾವುದೇ ಕ್ಷಣದಲ್ಲಿ ತೊರೆಯಬಹುದು.....|
ವೈಫಲ್ಯ ತಾಯಿ ಇದ್ದಂತೆ .........ಒಳ್ಳೆಯದನ್ನು ಕಲಿಸಿಕೊಡುವುದು ಅದರ ಗುಣ.
ತನ್ನ ನಡೆ, ನುಡಿ, ವಾತ್ಸಲ್ಯ, ಮಮತೆ ಎಲ್ಲವನ್ನು
ತುಂಬಿ ಸೋಲನ್ನು ಗೆಲುವಾಗಿಸುವಳು.......
ಮರೆಯದಿರು ಆ ತಾಯಿಯ......
ತೊರೆಯದಿರು ಆ ಮಾತೆಯ.......ಋಣವ
ಆತ್ಮಿಯನೇ...............!

Friday, October 24, 2008

ಓ ಕನ್ನಡನಾಡಿನ, ಗಂಧದಬೀಡಿನ ಮುತ್ತು ರತ್ನಗಳಿರಾ.....!

ಕನ್ನಡನಾಡಿನ, ಗಂಧದಬೀಡಿನ ಮುತ್ತು ರತ್ನಗಳಿರಾ.....!

ನಿಮ್ಮ ಹೃದಯ ಚಿಪ್ಪಿನಲ್ಲಿ ಬಚ್ಚಿಟ್ಟುಕೊಂಡಿರುವ
ನಿಮ್ಮ ಕನ್ನಡತನವನ್ನು ಹೊರಸೂಸಿ......|
ವಿಶ್ವದಾದ್ಯಂತ ಕನ್ನಡನಾಡು, ನುಡಿಯ ಸುಗಂಧವ ಬೀರಿ......
ರಾಜ್ಯವನ್ನಾಳುತ್ತಿರುವ ಜನನಾಯಕರನ್ನು ಬರೀ ಬೊಗಳೆ ಭಾಷಣ, ಪ್ರಚಾರ, ಆಶ್ವಾಸನೆ ಮಾಡುವುದನ್ನು ಬಿಟ್ಟು
ನಾಡಿಗಾಗಿ, ಮಾತ್ರು ಭಾಷೆಗಾಗಿ, ನಿರ್ಮಲ ಮನಸ್ಸಿನಿಂದ ದುಡಿಯಲು ಪ್ರೇರೆಪಿಸಿ.

ಕನ್ನಡಿಗರು ಹೇಡಿಗಳಲ್ಲ....! ಕುರಿಗಳೂ ಅಲ್ಲ.....!
ದಡ್ಡರಂತೂ ಮೊದಲೇ ಅಲ್ಲ....!
ಹೀಗಿದ್ದರೂ ಈ ಅಳುಕು, ಈ ಹಿಂಜರಿಯುವಿಕೆ ಯಾಕೆ.....?
ಸೋಮಾರಿತನವೇ, ಅಥವಾ ಬರೀ ಅಂಧಾಭಿಮಾನವೇ.....?

ನಿಮ್ಮ ಮಾತ್ರುಭಾಷೆಯನ್ನು ಉಳಿಸಲು,ಬೆಳೆಸಲು ಸಂಕೋಚವೇ....?
ಇನ್ನಾದರು ನಿಮ್ಮ ಅಂತರಾಳದ ಕಣ್ಣು ತೆರೆದು ನೋಡಿ ಕನ್ನಡಿಗರೇ......!
ನಮ್ಮ ಹಿರಿಯರು, ಗುರುಗಳು, ಕವಿಗಳು,ಕಲಾವಿದರು, ಸಾಹಿತಿಗಳು, ಗಣ್ಯರು, ಸಾರ್ವಭೌಮರು
ಬಿಟ್ಟು ಹೋಗಿರುವ ಈ ನೆಲ, ಜಲ, ಭಾಷೆಯ ಬೆಳೆಸೋಣ.
ಮಾತೇ ಕನ್ನಡತಾಯಿ ಭುವನೇಶ್ವರಿಯ ಪಾದಗಳಿಗೆ ನಮ್ಮ ತನು ಮನ ಅರ್ಪಿಸೋಣ..
ಜೈ ಭುವನೇಶ್ವರಿ
ಜೈ ಕರ್ನಾಟಕ
ಜೈ ಭಾರತಾಂಬೆ