ಆತ್ಮ್ಮಿಯರೇ ಕಳೆದ ಎರಡು ದಿನಗಳ ಕರಾಳ ದೃಶ್ಯಗಳನ್ನು ನೋಡಿದಿರಾ .. ...?
ಯಾರಿಂದ, ಯಾರ ಮುರ್ಖತನದಿಂದ ಮತ್ತೆ ಮತ್ತೆ ಇಂಥ ದುರ್ಗಟನೆ ನಡೆಯುತ್ತಲೇ ಇದೇ ...?
ಮಲಗಿರುವ ರಾಜಕಾರಣಿಗಳೇ...!
ಬರೀ ಆಸ್ತಿ ಮಾಡುವುದರಲಿ....., ದುರಾಡಳಿತ ನಡೆಸುವುದರಲಿ....ತೊಡಗಿರುವ
ನಿಮ್ಮ ಬೇಜವಾಬ್ದಾರಿಂದಾಗಿ ದೇಶ ತಲ್ಲಣಿಸುತ್ತಿದೆ...
ಸಾರ್ವಜನಿಕರ ಪ್ರಾಣ ಹರಣವಾಗಿ ಭಯಭೀತಿಯಿಂದ ತತ್ತರಿಸುತ್ತಿದ್ದಾರೆ...
ಸ್ವಲ್ಪ ನಿಮ್ಮ ಚಲನವಲನವನ್ನು ಇತ್ತ ಗಮನವರಿಸಿ.....
ಕೆಟ್ಟ ಅಧಿಕಾರ ನಡೆಸಿದ್ದು ಸಾಕು ಮಾಡಿ
ನಿಮ್ಮ ದುರಸೆಗಿಸ್ಟು ಬೆಂಕಿ ಹಾಕಿ
ಸುಟ್ಟು ಬೆಂದು ಹೋಗುತ್ತಿರುವ ನಮ್ಮ ದೇಶವನ್ನು
ನಿಮ್ಮನ್ನು ಆಯ್ಕೆ ಮಾಡಿದ ತಪ್ಪಿಗೆ ರಕ್ಷಿಸ ಬನ್ನಿ...
ಇಂದು ನೀವು ಭಯೋತ್ಪಾದನೆ, ಭಯೊತ್ಪದಕರನ್ನು ಬಡಿದಟ್ಟಿ ಆ ಉಗ್ರರನ್ನು,
ನಮ್ಮ ದೇಶದಾದ್ಯಂತ ಸಂಪೂರ್ಣ ನಾಶ ಮಾಡದಿದ್ದರೆ ನಿಮ್ಮ ಚಿತೆಗೂ ಬೆಂಕಿ ಹಚ್ಚಿಸಿಕೊಳ್ಳಲು ಸಿದ್ದ್ದರಾಗಿ....
ಅಂದು ಭಾರತದ ಸ್ವಾತಂತ್ರಕ್ಕಾಗಿ ಹೋರಾಟ....!
ಇಂದು ಭಾರತದ ರಕ್ಷಣೆಗಾಗಿ ಹೋರಾಟ....!
ಭಾರತ ದೇಶದ ರಕ್ಷಣೆಗೆ ಪಣ ತೊಟ್ಟು ನಿಂತಿರುವ ನಮ್ಮ ರಕ್ಷಣಾಪಡೆಗೆ ಭಗವಂತನು ಸಕಲ ಶಕ್ತಿಯನ್ನು ನೀಡಲಿ..
ಆ ದೇವನು ನಮ್ಮ ಭಾರತದ ಯೋಧರ ಜೊತೆಗಿರಲಿ ಎಂದು ಬೇಡಿಕೊಳ್ಳೋಣ.
ಹೋರಾಟದಲ್ಲಿ ಮಡಿದ ನಮ್ಮ ಪೋಲಿಸ್ ಆಧಿಕಾರಿ ಮಹಾನುಭಾವರಿಗೆ
ಹೃದಯ ಪೂರ್ವಕ ಶ್ರದ್ಧಾಂಜಲಿ...
ಜೈ ಜವಾನ್, ಜೈ ಕಿಸಾನ್, "ಮೇರಾ ಭಾರತ್ ಮಹಾನ್ ".
Subscribe to:
Post Comments (Atom)
No comments:
Post a Comment