Friday, March 9, 2012

BJP ಪಾರ್ಟಿಯ...... ಚಿಂತನ...... ಮಂಥನ......!

BJP ಪಾರ್ಟಿಯ...... ಚಿಂತನ...... ಮಂಥನ......!
ನಮ್ಮ ಯಡ್ಡಿಗೆ ತಂತು ಮುಖ ಭಂಗದ ಚುಂಬನ.....
ಕಾಶಿನಲ್ಲಿ ಇಬ್ಬರು ಸೇರಿ ವ್ರತ ಮಾಡಿ, ಮಾಡಿದ್ದೀವಿ ವಿಶ್ವನಾಥನಲಿ ಪ್ರಾರ್ಥನಾ..
ಆದರೆ ಈಡೇರಲಿಲ್ಲ ನಮ್ಮ ಮನದಾಳದ ಭಾವನ....
so better for come out from this Tension ......
we will go to Kashmir ಅಲ್ಲಿಯ weather ನಲ್ಲಿ ನಡೆಯಲಿ
ನಮ್ಮೀರ್ವರ...ಚಿಂತನ.....ಮಂಥನ......
HAPPY JOURNEY

ಬೀದಿನಾಯಿಗಳ ಹಾವಳಿಯ ಕುರಿತು :

ಬೀದಿನಾಯಿಗಳ ಹಾವಳಿಯ ಕುರಿತು :

ಪತ್ರಿಕಾ ಪ್ರತಿನಿಧಿಗಳೇ...! ಟಿ.ವಿ. ಮಾದ್ಯಮದ ಮಿತ್ರರೇ ....! ಹಾಗೂ ಬೆಂಗಳೂರು ನಗರದ ನಾಗರಿಕರೇ...!

ಬೆಂಗಳೂರು ನಗರದ ಚೊಕ್ಕ ಸಂದ್ರ ವಾರ್ಡ್ ನಲ್ಲಿ ಮೊನ್ನೆ ನಮ್ಮ ಇತರ ಬಂಧು-ಮಿತ್ರರಿಂದ ನಡೆದ ಘಟನೆಗೆ,
ಆದ ಅಚಾತುರ್ಯಕ್ಕೆ ದಯಮಾಡಿ ಕ್ಷಮಿಸಿ... ಅವರೆಲ್ಲರ ಪರವಾಗಿ ನಾನು ಕ್ಷಮೆಯಾಚಿಸುತ್ತಿದೇನೆ...
ಬಂಧುಗಳೇ...! ನಿಮ್ಮಗೆಲ್ಲಾ ತಿಳಿದಿರುವಂತೆ ಹಿಂದೆ ಉದ್ಯಾನಿ ನಗರವಾಗಿದ್ದ ನಮ್ಮ ಬೆಂಗಳೂರು ನಗರ ಇತ್ತೀಚೆಗೆ ಕಾಂಕ್ರಿಟ್ ನಗರವಾಗಿ ಹೋಗಿದೆ.
ಎಲ್ಲಿ ನೋಡಿದರೂ ಬರೀ ಕಟ್ಟಡಗಳೇ ತುಂಬಿ ವಿಶ್ರಾಂತಿಗೆ ನಮಗೆ ನೆರಳೇ ಇಲ್ಲವಾಗಿದೆ. ಮುಂಚೆ ಅಕ್ಕ -ಪಕ್ಕದ ಮನೆಯವರು, ಅಂಗಡಿಯವರು, ಕರುಣೆ ಪ್ರೀತಿಯಿಂದ ನಮಗೆ ಊಟ-ತಿಂಡಿ ಹಾಕುತ್ತಿದ್ದರು. ಇತ್ತೀಚೆಗಂತೂ ನಮಗೆ ಸರಿಯಾಗಿ ಊಟ-ತಿಂಡಿ ಸಿಗದೇ ಹಸಿವಿನಿಂದ ರಸ್ತೆ ಬದಿಗಳಲ್ಲಿ ನರಳುತ್ತಿದೇವೆ. ಕೆಲವೊಮ್ಮೆ ನಾವು ಹಸಿವಿನಿಂದ ಮಲಗಿದ್ದರೆ ಈ ಮೋಟರ್ ಬೈಕಿನವರು ನಮ್ಮವರ ಮೇಲೆ ಗಾಡಿ ಹಾರಿಸಿಕೊಂಡು ಹೋಗುತ್ತಾರೆ.

ಇನ್ನೊಂದು ಕಡೆ high tech ವರ್ಗದ, ನಮ್ಮ ಕುಲದ ಬಂಧು-ಮಿತ್ರರು, ಹೊರ ದೇಶದಿಂದ ಬಂದಿರುವ ಇತರ ವರ್ಗದ ನಾಯಿಗಳು A/c CAR ನಲ್ಲಿ ಓಡಾಡುತ್ತಾ, hygienic food ತಿನ್ನುತ್ತಾ, ಒಳ್ಳೊಳ್ಳೆ Jocket, ಬೆಲ್ಟ್ ಹಾಕಿಕೊಂಡು Bangalore park ಗಳಲ್ಲಿ Morning walking ಗೆ style ಆಗಿ ಓಡಾಡುತ್ತಾ ನಮ್ಮನ್ನು ಅಣಕಿಸುತ್ತಿದ್ದಾರೆ. ನಮ್ಮ ಕಷ್ಟ ಕೇಳುವವರೇ ಇಲ್ಲವಾಗಿದ್ದರೆ.
ಆ ಕಾರ್ಪೋರೇಷನ್ ನವರು ಇದುವರೆಗೂ ನಮಗೆಂತ ಏನೂ ಅನುಕೂಲ ಮಾಡಿರುವರು ಹೇಳಿ...? ಬಡವರಿಗೆಂದು ವಾಸಿಸಲು ಆಶ್ರಯ ಯೋಜನೆ, ಆ ಯೋಜನೆ ಈ ಯೋಜನೆ ಅಂತ ಇದೆ. ನಮಗೆ ಅಂತ ಯಾವ ಯೋಜನೆ ಈ ಸರ್ಕಾರದವರು ಅನುಷ್ಟಾನಕ್ಕೆ ತಂದಿರುವರು ನೀವೇ ಹೇಳಿ........?
ಈ ಸರ್ಕಾರದವರು,ಕಾರ್ಪೋರೇಷನ್ ನವರು ಆ ಕಾರ್ಯಕ್ಕೆ, ಈ ಶಂಕುಸ್ತಾಪನೆ ಎಂದು ನೆಪ ಹೇಳಿ ಸಾವಿರಾರು ಕೋಟಿ ಲೂಟಿ ಮಾಡುತ್ತಿದ್ದಾರೆ. ನಮ್ಮ ಹೊಟ್ಟೆ ಪಾಡು ಕೇಳುವವರೇ ಇಲ್ಲವಾಗಿದೆ. ಹಸಿವಿನ ನೋವಿನಲ್ಲಿ ನಿಮ್ಮಂತಹ ಹಿರಿಯರನ್ನು ಕಚ್ಚಲು ಬಂದರೇ ಹೊಡೆಯುವಿರಿ, ಭಯದಿಂದ, ತಿಳಿಯದೆ, ಹಸಿವಿನ ನೋವಿನಿಂದ ಪುಟ್ಟ
ಕಂದಮ್ಮಗಳನ್ನು ನಮ್ಮ ಬಂಧು-ಮಿತ್ರರು ಹಾವಳಿ ಮಾಡಿರುವರು. ಅದಕ್ಕಾಗಿ ನಾನು ವಿಷಾದಿಸುವೆ. ಎಷ್ಟೇ ಅದರೂ ನಾವು ನಾಯಿ ಜನ್ಮದವರು ನಿಮ್ಮಷ್ಟು ಬುದ್ದಿ-ತಿಳುವಳಿಕೆ ನಮಗೆ ಇಲ್ಲ.
ವಿನಾ ಕಾರಣ ನಮ್ಮನ್ನು ದೂಷಿಸದೆ, ದಯಮಾಡಿ ನಿಮ್ಮ ಕಾರ್ಪೋರೇಷನ್ ಅಧಿಕಾರಿ ವರ್ಗದವರೊಡನೆ ಮಾತಾಡಿ, ಮೇಯರ್ ರವರಿಗೆ ಬೆಂಗಳೂರು ನಗರದಲ್ಲಿ ನಮಗೆ ಸೂಕ್ತ ವಸತಿ ಹಾಗೂ ಊಟದ ವ್ಯವಸ್ತೆಯನ್ನು
ಮಾಡಿಕೊಡುವುದಕ್ಕೆ ಹೇಳಿ. ನೀವು ಈ ವಿಷಯವಾಗಿ ಕೂಡಲೇ ಕ್ರಮ ಕೈಗೊಳ್ಳಲು ಕಾರ್ಪೋರೇಷನ್ ಎದುರು ಧರಣಿ ಮಾಡುವುದೇ ಆದರೆ, ಧರಣಿ ಮಾಡುವಾಗ ನಮ್ಮನ್ನು ಆಹ್ವಾನಿಸಿ, ನಮಗೆ ಸೂಕ್ತ ವಾಹನಗಳ ವ್ಯವಸ್ಥೆ ಮಾಡಿ. ಇಡೀ ಬೆಂಗಳೂರು ನಗರದ ನಮ್ಮ ಬಂಧು-ಮಿತ್ರರೆಲ್ಲರೂ ನಿಮ್ಮ ಧರಣಿಗೆ ಕೈ ಜೋಡಿಸುವರು.
ನಿಮ್ಮ ಮನೆ ಅಂಗಳದ, ಪುಟ್ಟ ಕಂದಮ್ಮಗಳ ಬಾಳಿಗೆ ಇನ್ನೆಂದೂ ನಾವು ನೋವುವುಂಟು ಮಾಡೆವು.
ಬೆಂಗಳೂರು ನಾಗರೀಕರೇ ಎಲ್ಲಾ ನಿಮ್ಮ ಮುಂದಿನ ಗುರುತರ ತೀರ್ಮಾನದಲ್ಲಿ ನಿಂತಿದೆ. ಇಲ್ಲಿ ನೆರೆದಿರುವ ಎಲ್ಲಾ ಚಾನೆಲ್ ನ ಮಾದ್ಯಮ ಮಿತ್ರರು ಇದಕ್ಕೆ ಸಹಕರಿಸಬೇಕೆಂದು ಕೇಳಿಕೊಳ್ಳುತ್ತೇನೆ.
ಧನ್ಯವಾದಗಳು
ಜೈ ಕರ್ನಾಟಕ
312513_138743939559773_100002725039869_140000_1434395349_n.jpg